ಸರ್ವರಿಗೂ ಎಳ್ಳು ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು.

 ಎಳ್ಳು ಅಮಾವಾಸ್ಯೆಯ ಸಂಭ್ರಮ

ನಾವು ಸಣ್ಣವರಿದ್ದಾಗ ಇರುವ ಎಳ್ಳು ಅಮವಾಸ್ಯೆಯ ಉತ್ಸಾಹ ಸಡಗರ. ಆಧುನಿಕತೆಯ ಬರದಲ್ಲಿ ಸ್ವಲ್ಪ ಮರೆಯುತ್ತಿದ್ದೆವು ಏನು ಅನಿಸುತ್ತಿದೆ. 

ಮೊದಲು ಹಬ್ಬವೆಂದಾಗ ಎರಡು ಮೂರು ದಿನಗಳಿರುವಾಗಲೇ ಮನೆಯಲ್ಲಿ ತಾಯಂದಿರು ಅಕ್ಕಂದಿರೆಲ್ಲ ಸೇರಿ ರೈತರ ಹಬ್ಬದ ತಯಾರಿ ಜೋರಾಗಿ ಮಾಡುತಿದ್ದರೂ. ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ದಪಾಠಿಯಂತಹ ರೊಟ್ಟಿಗಳನ್ನು ಬಡಿದಿಡುತಿದ್ದರು. ಅದರ ಜೊತೆಗೆ ನಾನಾ ಬಗೆಯ ಚಟ್ಟಿ, ಉಡಿದು ಬಳಕ ಹಾಕಿಟ್ಟ ಕಡ್ಲೀಪಲ್ಲೆಯ ಹಿಂಡಿ ಪಲ್ಲೆ, ಎಣ್ಣೆಗಾಯಿ,  ಶೇಂಗಾ ಹೋಳಿಗೆ ಜೊತೆಗೆ ತುಪ್ಪ ಹಾಗು ಜೋಳದ ಕಡಬು ಸಜ್ಜಿ ಕಡುಬು ಹೀಗೆ ಮುಂತಾದವುಗಳು ತಯಾರಿಸುತ್ತಿದ್ದರು. ಈಗ ಆ ಸಂಭ್ರಮ ಕಡಿಮೆಯಾಗಿದೆ. ರೊಟ್ಟಿ, ಹಿಂಡಿ ಎಲ್ಲವೂ ರೆಡಿಮೇಡ್ ಆಗಿದೆ. ಅವುಗಳ ಸ್ಥಾನ ಪಿಜ್ಜಾ ಬರ್ಗರ್ ಗಳು ಪಡೆದುಕೊಂಡಿವೆ.


ಎತ್ತುಗಳಿಗೆ ಮೈ ತೊಳೆದು, ಬಣ್ಣ ಬಳಿದು ಕೋಡಣಸು ಜೂಲ ಹಾಕಿ, ಹಣೆಕಟ್ಟ ಗೊಂಡೆ ಕಟ್ಟಿ, ಬಂಡಿ ಚಾಕಿಗೆ ಹುರ್ಮಂಜು, ಸುಣ್ಣ ಬಳಿತಿದು ನಿಲ್ಲುಸುತ್ತಿದ್ದ ಬಂಡಿಗಳ ಜಾಗದಲ್ಲಿ. ಕಾರು ಬೈಕುಗಳು ನಿಂತಿವೆ

ಹೆಣ್ಣು ಮಕ್ಕಳು ಬೆಳಗ್ಗೆ ಬೇಗ ಎದ್ದು ಎಣ್ಣೆ ಹಚ್ಚಿ ತಲೆ ಎರಕೊಂಡು ಸಾಂಪ್ರದಾಯಿಕ ಸೀರೆ ಕುಪ್ಪುಸ ತೊಟ್ಟು, ಕೊರಳಗೆ ಬೋರಮಳ, ಮೂಗಿಗೆ ನತ್ತು , ತೆಲಿಗೆ ಹೂ ಮುಡುಕೊಂಡು ಅಪ್ಪಟ ದೇಶೀಯ ಸೊಗಡಿನಲ್ಲಿ ಕಾಣುತಿದ್ದ ಹೆಂಗಳೆಯರು. ಸಾಂಪ್ರದಾಯಿಕ ಕಾಲ ಹೋಗಿ ಈಗ ನಾವು ಪಾಶ್ಚಾತ್ಯ ಸಂಸ್ಕೃತಿಗೆ ಹೆಚ್ಚು ಅಂಟಿಕೊಂಡು ಮೈಕಾಡುವ ಉಡುಪು ಧರಿಸಿ ನಮ್ಮ ದೇಸಿ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ.

ಸಾಂಪ್ರದಾಯಿಕ ಉಡುಗೆಯಲ್ಲಿ ತಯಾರು ಮಾಡಿ ದೊಡ್ಡ ಬುತ್ತಿಯ ಗಂಟು ತಲೆ ಮ್ಯಾಲ ಹೊತ್ತುಕೊಂಡು ಮನೆಯವರಷ್ಟೇ ಅಲ್ಲದೆ ಜಾತಿಭೇದ ಮರೆತು ಓಣಿಯವರೆಲ್ಲರನ್ನು ಕರ್ಕೊಂಡು ಘಲ್ ಘಲ್ ಸದ್ದು ಮಾಡುತ್ತಾ ಎತ್ತಿನ ಬಂಡಿಯಲ್ಲಿ ಕುಳಿತು ಹೊಲಕ್ಕೆ ಹೋಗುವದು ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ. 

ಆದರೆ ಇಂದು ದೊಡ್ಡ ದೊಡ್ಡ ನಗರದ ದೊಡ್ಡ ದೊಡ್ಡ ಕಾರುಗಳಲ್ಲಿ ಬಂದು ಉದ್ಯಾನವನದಲ್ಲಿ ಕುಳಿತು ಎಳ್ಳು ಅಮಾವಾಸ್ಯೆಯ ಸಂಭ್ರಮ ಆಚರಿಸುತ್ತಾರೆ. ಇದು ನೋಡಿದರೆ ಮನಸ್ಸಿಗೆ ನೋವಾಗುಬದು ಸಹಜ. ಹಳ್ಳಿಯಲ್ಲಿದ್ದ ಹೊಲ ಮಾರಿ ಸಿಟಿ ಜೀವನಕ್ಕೆ ಹೊಂದಿಕೊಂಡವರಿಗೆ ಅನಿವಾರ್ಯವೂ ಹೌದು. 

ಕನಿಕೆಯಿಂದ ಕೊಂಪೆ ಮಾಡಿ. ಐದು ಕಲ್ಲುಗಳನಿಟ್ಟು ಕಲ್ಲ ಪಾಂಡವರು ಹಾಗೂ ಬನ್ನಿ ಗಿಡಕ್ಕೆ ಪೂಜೆ ಮಾಡಿ. ಮಕ್ಕಳ ಜೊತೆ ಹೊಲ ತುಂಬ ತೀರ್ಗ್ಯಾಡಿ ಚಾಂಗ್ ಬೋಲೋ, ಕಿಚಡಿ ಬೋಲೋ ಎಂದು ಚೆರಗ ಚೆಲ್ಲಿದ ಕುಷಿ ಇಗೆಲ್ಲಿ.

ಚೆರಗ ಮೇಲೆ ಜೊತೆಗೆ ಬಂದ ಎಲ್ಲರೂ ಮರದ ಕೆಳಗೆ ಕುಳಿತು ಹಬ್ಬಕ್ಕಾಗಿ ವಿಶೇಷವಾಗಿ ತಯಾರಿಸಿದ ಸಬ್ಬಸಿಗಿ ಪಲ್ಲೆ ಹಾಕಿ ತಯಾರಿಸಿದ ಜೋಳದ ಕಡಬು, ಸಜ್ಜೆ ಗಡಬು, ಭಜ್ಜಿ, ಪುಂಡಿಪಲ್ಲೆ, ಹಿಂಡಿ  ಪಲ್ಯ, ಹೋಳಿಗೆ, ಖಡಕ್ ಸಜ್ಜೆ ರೊಟ್ಟಿ, ಜೋಳದ, ಶೇಂಗಾ ಹಿಂಡಿ, ಕಾರ್ಯಾಳ ಹಿಂಡಿ ಮಸರು ಶಾವಿಗಿ, ಅನ್ನ- ಸಾಂಬರ್‌, ಹಪ್ಪಳ, ಸಂಡಿಗೆ ಹೀಗೆ ಬಾಯಲ್ಲಿ  ತರಿಸುವ ಮೃಷ್ಟಾನ್ನ  ಭೋಜನವನ್ನು  ಮನೆಯವರು, ಸಂಬಂಧಿಗಳು ಮತ್ತು ಸ್ನೇಹಿತರೊಂದಿಗೆ ಸಾಮೂಹಿಕ ಊಟ ಸವಿಯುವ ಆತ್ಮೀಯತೆ ಯಾವ ಪಾಯುಸ್ಟಾರ್ ಹೋಟೆಲ್ನಲ್ಲೂ ಸಿಗೋದಿಲ್ಲ..

ಊಟ ಮುಗಿದ ಮೇಲೆ ಗಂಡು ಮಕ್ಕಳು ಸ್ವಲ್ಪ ಹೊತ್ತು ದೇಶಿ ಆಟಗಳಲ್ಲಿ ತಲ್ಲಿನರಾದರೆ. ಹೆಣ್ಣು ಮಕ್ಕಳು ಹೋಲ್ತುಂಬ ತಿರ್ಗ್ಯಾಡಿ ಸುಲ್ಗಾಯಿ ಕಿತ್ತಿ, ಜೋಳದ ದಂಟು ಮುರಿದು ತಿನ್ನುತ್ತಾ. ಹೊಲದ ಒಡ್ಡಿಗೆ ಇರುವ ಬಾರಿಕಾಯಿ ಹುಡುಕಿ ತಿನ್ನುತ್ತಿದ್ದರು.. ನಾ ಮುಂದು ನೀ ಮುಂದು ಎನ್ನುತ್ತ ಹೆಣ್ಣು ಮಕ್ಕಳೆಲ್ಲ ಜೋಕಾಲಿಗೆ ಮುಗಿಬಿದ್ದರೆ. ಹುಡುಗರು ಜೋಕಾಲಿ ಕಟ್ಟಿಗೆ ಕಟ್ಟಿದ ಬಾಲಂಗೋಚಿ ಹಗ್ಗ ಹಿಡಿದು ಜೋರಾಗಿ ತೂಗಿ ಸಂಭ್ರಮಿಸುವ ಕಾಲ ಹೋಗಿ. ಸದಾ ಮೊಬೈಲ್ ಗೀಳು ಅಂಟಿಸಿಕೊಂಡು ಸಂಸ್ಕೃತಿ ಸಂಪ್ರದಾಯಗಳನ್ನು ಮರೆಯುತ್ತಿದ್ದೇವೆ. ಇದನ್ನು ಉಳಿಸಿ ಬೆಳೆಸುವ ಕರ್ತವ್ಯ ಇಂದಿನ ಯುವ ಪೀಳಿಗೆಯ ಜವಾಬ್ದಾರಿಯಾಗಿದೆ..

,...................................................................................

✍ ಬಸವರಾಜ ಭೂತಿ, ಶಿಕ್ಷಕರು 

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿಭೂತಿಹಳ್ಳಿ ಅಲ್ಮೆಲ್

 https://youtu.be/KPK8zNjRQrg?si=yCX_6abwgRciZme_

Comments