ರಾಜ್ಯದ್ಯಂತ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಶುಭವಾಗಲಿ
Facebook . instagram ಶಾಲಾ ಜೀವನದ ಒಂದು ಭಾವಯಾನ ಇಂದು ನಮ್ಮ ಶಾಲೆಯ ಅಂಗಳದಲ್ಲಿ ಒಂದು ವಿಶಿಷ್ಟ ಮೌನ. ಎಸ್ಎಸ್ಎಲ್ಸಿ ಪರೀಕ್ಷೆಯ ಮೊದಲ ದಿನ. ಐದು ವರ್ಷಗಳ ಹಿಂದೆ, ಅಮ್ಮನ ಸೆರಗು ಹಿಡಿದು, ಕಣ್ಣೀರು ಹಾಕುತ್ತಾ ನಮ್ಮ ಶಾಲೆಗೆ ಬಂದ ಪುಟ್ಟ ಮಕ್ಕಳು ಇಂದು ಆತ್ಮವಿಶ್ವಾಸದ ಮೂರ್ತಿಗಳಾಗಿ ಪರೀಕ್ಷಾ ಕೇಂದ್ರದತ್ತ ಹೆಜ್ಜೆ ಹಾಕುತ್ತಿದ್ದಾರೆ. "ಬರಿಗೈಲಿ ಬಂದು ಇಂದು ಸಾಧನೆಯ ಶಿಖರ ಏರಲು ಸನ್ನದ್ಧವಾಗಿವೆ. ಜ್ಞಾನದ ಸುಂದರ ಮೂರ್ತಿಗಳಾಗಿ ಕಂಗೊಳಿಸುತ್ತಿವೆ. ಇದೆ ಶಿಕ್ಷಕನ ಬದುಕಿನ ಧನ್ಯತಾ ಭಾವ." ನಮ್ಮ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕೇವಲ ಕಟ್ಟಡವಲ್ಲ; ಇದು ಸಾವಿರಾರು ಹೆಣ್ಣುಮಕ್ಕಳ ಕನಸುಗಳ ತಾಣ. 6ನೇ ತರಗತಿಗೆ ಬಂದಾಗ ಮನೆ ನೆನಪಿನಲ್ಲಿ ಜಪ್ಪಿಟ್ಟು ಕುಳಿತ ಆ ಮುಗ್ಧ ಮುಖಗಳು ಈಗಲೂ ಕಣ್ಣ ಮುಂದೆ ಇವೆ. ಅಂದು ನಾವು ಅವರಿಗೆ ಕೇವಲ ಪಾಠ ಹೇಳಿಕೊಡದೆ, ಅಮ್ಮನ ಪ್ರೀತಿ, ಅಪ್ಪನ ಧೈರ್ಯ ಮತ್ತು ಅಕ್ಕರೆ ನೀಡಿ. ಆ ಪುಟ್ಟ ಹಕ್ಕಿಗಳಿಗೆ ಇಂದು ಜ್ಞಾನದ ರೆಕ್ಕೆ ಮೂಡಿಸಿ, ಬಾನ ಎತ್ತರಕ್ಕೆ ಹಾರಲು ಸಜ್ಜುಗೊಳಿಸಿದೇವು. "KREIS" ಸಂಸ್ಥೆಯ "ಪ್ರತಿಭೆಗೆ ಪುರಸ್ಕಾರ" ಎಂಬ ದ್ಯೇಯ ವ್ಯಾಕ್ಯದಂತೆ, ವಿಭೂತಿಹಳ್ಳಿಯ ಈ ಮಣ್ಣಿನಲ್ಲಿ ನಾವು ನಿಮ್ಮ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಿ. ಶಿಕ್ಷಕ ವೃಂದ ರಾತ್ರಿ-ಹಗಲೆನ್ನದೆ ನಿಮ್ಮ ಏಳಿಗೆಗಾಗಿ ಶ್ರಮಿಸಿತು. ನಾವು ಮಾಡಿದ ಪಾಠ ಮತ್ತು ವಿಶೇ...







