ನನ್ನ ಸ್ಮೃತಿ ಪಟಲದಲ್ಲಿದಂತೆ 2011 ಇಸ್ವಿ ಡಿಸೆಂಬರ ತಿಂಗಳಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಗೊಂಡಿತ್ತು. ನಾನಾಗ ಸುಣಗಾರ ಪಿಯು ಕಾಲೇಜನಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ ಹಾಗೂ ಆಲಮೇಲನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೆ.
ಅಂದು ಫಲಿತಾಂಶದ ಸುದ್ದಿ ಕೇಳಿ, ಅಂದು ಮಧ್ಯಾಹ್ನ ಶಾಲೆ(ಆಲಮೆಲ)ಯಿಂದ ಸಿಂದಗಿಗೆ ದೌಡಾಯಿಸಿ ಹೊರಟು ನಿಂತೆ. ದಾರಿ ಮಧ್ಯ ಮಧ್ಯ ಮನಸ್ಸಿಗೆ ಕಸಿವಿಸಿ ಅನಸಿದರು. ರಿಸಲ್ಟ್ ನೋಡುವ ಕೌತುಕ ಹೆಚ್ಚಾಗಿತ್ತು. ಎನಾದಿತು ಎನ್ನುವ ಭಯದಲ್ಲಿದ್ದ ನನಗೆ ಊರಿಗೆ ಬರುವಷ್ಟರಲ್ಲಿ ನನಗೆ ಶುಭ ಸುದ್ದಿಯೇ ಬರಮಾಡಿತು. ಹೇಗೋ… ಎನೋ ನಾನರಿಯೆ ಆಯ್ಕೆಯಾದ ಸುದ್ದಿ ಊರತುಂಬಾ ಹಬ್ಬಿತ್ತು. ಸ್ನೇಹಿತರೆಲ್ಲರು ಬರುತ್ತಲೆ ಶುಭಾಶಯ ತಿಳಿಸಲಾರಂಬಿಸಿದರು. ನನಗೆ ಗೊತ್ತಿರದೆ ನಾನು ಕೆಟಗೆರಿ ಕೋಟಾದಡಿಯಲ್ಲಿ ಆಯ್ಕೆಯಾಗಿದ್ದೆ. ಈ ವಿಷಯ ಮೊದಲು ನನ್ನ ತಂದೆ ತಾಯಿಗೆ ತಿಳಿಸಬೇಕು ಅಂದುಕೊಂಡೆ. ಆದರೆ ಅವರು ಮನೆಯಲ್ಲಿ ಇರಲಿಲ್ಲ ದೂರದ ಮಹಾರಾಷ್ಟ್ರಕ್ಕೆ ದುಡಿಯಲೆಂದು ಹೋಗಿದ್ದರು. ಇವಾಗಿನ ಹಾಗೆ ಆಗ ಎಲ್ಲರಲ್ಲೂ ಮೋಬೈಲ್ ಹೆಚ್ಚು ಇರಲಿಲ್ಲ ಹೀಗಾಗಿ ಅವರಿಗೆ ಸುದ್ದಿ ತಿಳಿಯಲು ತಡವಾಯಿತು. .

ತಾತ್ಕಾಲಿಕ ಆಯ್ಕೆ ಪಟ್ಟಿಯಾದ್ದರಿಂದ ಅಂತಿಮ ಆಯ್ಕೆ ಪಟ್ಟಿ ಬರುವರೆಗೂ ಹೆಚ್ಚಿಗೆ ಖುಷಿ ಪಡುವದು ಬೇಡವೆಂದು ಸುಮ್ಮನಾದೆ. ಎಕೆಂದರೆ ಈ ಮುಂಚೆಯು ಒಂದು ಭಾರಿ 2008 ರಲ್ಲಿ ಹತ್ತಿರಕ್ಕೆ ಬಂದು ಆಯ್ಕೆ ಪಟ್ಟಿಯಿಂದ. ಹೊರಬಿದ್ದಿದ್ದೆ. ಆದರು ಒಳಗೊಳಗೆ ಖುಷಿ. ಎನೋ ಸಾದಿಸಿದ ತೇಜೆಸ್ಸು ಮುಖದಲ್ಲಿತ್ತು.
ಕಲಿಯುವ ವಯಸ್ಸಿನಲ್ಲಿ ಕಿತ್ತು ತಿನ್ನುವ ಬಡತನ. ಇದರ ಮದ್ಯ ಹೊಟ್ಟೆ ಹೊರೆಯುವ ಸವಾಲು. ಹೀಗಾಗಿ ಶಾಲೆಗೆ ಹೋಗಿದ್ದಕಿಂತಲು ಹೆಚ್ಚಾಗಿ ಗಾರೆ ಕೆಲಸ, ಹೋಟೆಲ ಕೆಲಸ, ಬೆಳಗ್ಗೆ ಹಾಲು, ಪೇಪರ್ ಅದು ಇದು ಅಂತ ಸಿಕ್ಕ ಸಿಕ್ಕ ಕೆಲಸ ಮಾಡಿದ್ದೆ ಹೆಚ್ಚು.
ಕಲಿಯುವ ಇಚ್ಚೇ ಹುಟ್ಟಿದ್ದೆ ಡಿಗ್ರಿ ನಂತರ. ಹಾಗೊ.... ಹೀಗೊ ಮಾಡಿ ಬಿ.ಇಡಿ ಪದವಿ ಕೂಡಾ ಮುಗಿಸಿದ್ದೆ. ಆಗಲೆ ನನಗೆ ಓದುವ ಹಂಬಲ ಹೆಚ್ಚಾಗಿದ್ದಿದ್ದು. ಆಗ ಎಲ್ಲಾ ಸ್ನೇಹಿತರು ಡಿಗ್ರಿ ಮುಗಿಸಿ ರೂಮ್ ಹಿಡಿದುಕೊಂಡು ಓದುತ್ತಿದ್ದರು. ನಾನು ಬೆಳಗ್ಗೆ ಹಾಲು ಪೇಪರ್ ಹಂಚಿ ಅವರ ಜೊತೆ ಜಾಯಿನ್ ಆಗ್ತಿದೆ. ಸರಕಾರಿ ಕೆಲಸ ಗಿಟ್ಟಿಸುವ ಮಹಾದಾಸೆಗೆ ಹಗಲು ರಾತ್ರಿಯಲ್ಲ ಒದುತಿದ್ದೆ ಬೆಳಗ್ಗೆ ಪಾರ್ಟ್ ಟೈಮ್ ಶಿಕ್ಷಕನಾಗಿ ಕೆಲಸಕ್ಕೆ ಹೋಗ್ತಾ ಇದ್ದೆ. ನಾಪಟ್ಟ ಶ್ರಮಕ್ಕೆ ಕೊನೆಗೂ ಆ ದೇವರು ಕೈ ಬಿಡಲಿಲ್ಲ. ಒಂದು ಒಳ್ಳೆಯ ಹುದ್ದೆಯೇ ಕರುಣಿಸಿ ಬಿಟ್ಟ.
ನನಗೆ ಸರಕಾರಿ ನೌಕರಿ ಬಂದ ಸುದ್ದಿ ಕೇಳಿ ತಮ್ಮನೊಬ್ಬನನ್ನೇ ಅಲ್ಲೇ ಮಹಾರಾಷ್ಟ್ರದಯೆ ದುಡಿಯಲು ಬಿಟ್ಟು ನಮ್ಮ ತಂದೆ ತಾಯಿ ಇಬ್ನರೆ ಮರಳಿ ಬಂದರು. ಬಂದವಳೇ ನಮ್ಮವ್ವ ಸುಮ್ಮನೆ ಕೊಡಲಿಲ್ಲ ಬಂದು ಬಾಂಧವರಿಗೆಲ್ಲ ನನಗೆ ಸರ್ಕಾರಿ ನೌಕರಿ ಸಿಕ್ಕ ಸುದ್ದಿ ತಿಳಿಸುತ್ತಾ. ಕನ್ಯಾನ್ವೇಷಣೆಯಲ್ಲಿ ತೊಡಗಿದಳು. ಇನ್ನು ತಾತ್ಕಾಲಿಕ ಅಯ್ಕೆಪಟ್ಟಿಯಲ್ಲಿದ್ದ ನಾನು ಆತಂಕದಲ್ಲಿಯೆ ಅಂತಿಮ ಆಯ್ಕೆ ಪಟ್ಟಿಗಾಗಿ ಕಾಯುತ್ತಿದ್ದೆ..
ಎಲ್ಲು ಹಿಂದಿ ಹುದ್ದೆ ಖಾಲಿ ಇರದ ಕಾರಣ ಮರು ಸ್ಥಳ ನಿಯುಕ್ತಿಯಾಗುವರೆಗೆ ಬೆಂಗಳೂರಿನಲ್ಲೆ ಉಳಿಯಕಾಯಿತು. ನನ್ನಂತೆ ನೂರಾರು ನೊಂದ ಶಿಕ್ಷಕರು ಹೆಚ್ಚುವರಿಯಾಗಿ ಮರು ಸ್ಥಳನಿಯುಕ್ತಿಗಾಗಿ ಕೇಂದ್ರ ಕಚೇರಿ ಮುಂದೆ ದಿನಾ ಅಲೆದಾಡುತಿದ್ದರು.
ಅದೃಷ್ಟಕ್ಕೆ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿದ್ದ ನನ್ನ ಸ್ನೇಹಿತರೊಬ್ಬರು ನಮ್ಮ ಇಲಾಖೆಯಲ್ಲಿ ನಿಲಯ ಪಾಲಕರಾಗಿ ಆಯ್ಕೆಯಾಗಿದ್ದರು. ಅವರು ಶಿಕ್ಷಣ ಇಲಾಖೆಯಿಂದ ಬಿಡುಗಡೆಯಾಗಿ ಬರಲೇ ಇಲ್ಲ. ಹೀಗಾಗಿ ವಾರ್ಡನ್ ಹುದ್ದೆ ಖಾಲಿ ಉಳಿದಿತ್ತು. ಬಸವನ ಬಾಗೇವಾಡಿಯ ಕೊಲಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ನಿಲಯಪಾಲಕನಾಗಿ ಅಗಷ್ಟ 14. 2012 ರಂದು ನಿಯೋಜಿಸಿಕೊಂಡು ಬಂದು ಹಾಜರಾದೆ.
ನಿಯೋಜನೆಯ ಮೆರೆಗೆ ನಿಲಪಾಲಕನಾಗಿ ವರದಿ ಮಾಡಿಕೊಳ್ಳಲು ಬಂದಾಗ ಮೂಲಭೂತ ಸೌಕರ್ಯವಿರದೆ ನಲುಗಿದ್ದ ಶಿಥಿಲಾವಸ್ಥೆಯ ಬಾಡಿಗೆ ಕಟ್ಟಡ ನೋಡಿ ಇಲ್ಲಿ ನೌಕರಿ ಮಾಡಬೇಕೆ ಅನ್ನುವ ಭಯ ಆತಂಕವಾಯಿತು. ಅನಿವಾರ್ಯವೂ ಇತ್ತು ಹೀಗಾಗಿ ಕೆಲಸ ಆರಂಬಿಸಿದೆ.
ಈ ಶಾಲೆಯಲ್ಲಿ ಕೋರ್ಟ ಆದೇಶದ ಮೆರೆಗೆ ಮುಂದುವರೆದಿದ್ದ ಪ್ರಾಂಶುಪಾಲರು ಕರ್ತವ್ಯ ನಿರ್ವಹಿಸುತಿದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ತಾಲೂಕಾ ಅಧಿಕಾರಿಗಳೆ ಪ್ರಾಂಶುಪಾಲರಾಗಿ ಪ್ರಭಾರ ವಹಿಸಿದ್ದರು. ವಾರ್ಡನರಾಗಿ ಸಮಾಜ ಕಲ್ಯಾಣ ಇಲಾಖೆಯ ನಿಲಯಪಾಲಕರನ್ನೆ ನಿಯೋಜಿಸಲಾಗಿತ್ತು. ಹೀಗಾಗಿ ಈ ಶಾಲೆಯಲ್ಲಿ ಹಲವು ಸಮಸ್ಯ ಎದುರಿಸಬೇಕಾಯಿತು. ನಂತರ ಪ್ರಾಂಶುಪಾಲರು ಮತ್ತು ನಿಲಯಪಾಲಕರು ಬದಲಾದರು. ಪಕ್ಕದ ಮೋರಾರ್ಜಿ ಶಾಲೆಯ ಪ್ರಾಂಶುಪಾಲರಾದ ಚಲವಾದಿ ಸರ್ ಅವರು ವಹಿಸಿಕೊಡಾಗ ಪರೀಸ್ಥಿತಿ ಹತೊಟಿಗೆ ಬಂದಿತ್ತು.
ಇನ್ನೇನು ಸರಾಗವಾಗಿ ನಡೆಯುತ್ತಿದೆ ಅನ್ನುವಷ್ಟರಲ್ಲೆ ಮರುವಿನ್ಯಾಸವೆಂಬ ಹೆಸರಿನಲ್ಲಿ ಮತ್ತೊಂದು ಬಿರುಗಾಳಿ ಬಿಸಿತು. ಮತ್ತೆ ನನ್ನ ಮರುವಿನ್ಯಾಸದ ಹೆಸರಲ್ಲಿ ಮಂಡ್ಯ ಜಿಲ್ಲೆಗೆ ನಿಲಯಪಾಲಕನಾಗಿ ನಿಯೋಜಿಸಲಾಗಿತ್ತು. ಮೆಲಾಧಿಕಾರಿಗಳ ಗಮನಕ್ಕೆ ತಂದು ಮತ್ತೆ ಅದೇ ಸ್ಥಳದಲ್ಲೆ ಮುಂದುವರೆದೆ. ಅಷ್ಟೊತ್ತಿಗೆ ಶಹಾಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹಿಂದಿ ಹುದ್ದೆ ಖಾಲಿಯಾಗಿದ್ದು ತಿಳಿದು. ಸ್ನೇಹಿತರೊಬ್ಬರ ಸಹಾಯದಿಂದ ಈ ಶಾಲೆಯ ನನ್ನ ಮೂಲ ಹುದ್ದೆಗೆ ಅಗಸ್ಟ 14. 2013 ರಂದು ವರ್ಗಾಯಿಸಿಕೊಂಡು ಬಂದೆ.
ಮರು ದಿನವೆ ಸ್ವಾತಂತ್ರ್ಯ ದಿನಾಚರಣೆ ನನಗು ಆಗ ಸ್ವಾತಂತ್ರ್ಯ ಸಿಕ್ಕ ಅನುಭವ. ಕೆವಲ ಒಂದೆ ವರ್ಷದಲ್ಲಿ ಸೇವಾವಧಿಯಲ್ಲಿ ಇಷ್ಟೆಲ್ಲಾ ಏರಿಳಿತ ಕಂಡವನು ನಾನು.ಈ ಶಾಲೆಯಲ್ಲಿ ನೆಮ್ಮದಿಯ ನೆಟ್ಟುಸಿರು ಭಿಟ್ಟು ನಾಳೆ ಆಗಸ್ಟ್ ತಿಂಗಳಿಗೆ 11 ವರ್ಷ ಪೂರೈಸಲಿದ್ದೇನೆ.
ನಿಜ ಹೇಳಬೇಕು ಅಂದ್ರೆ ಇಷ್ಟು ದಿನದ ಈ ಶಿಕ್ಷಕ ವೃತ್ತಿ ಸಾಕಷ್ಟು ತೃಪ್ತಿ ತಂದಿದೆ. ನನ್ನ ಸೇವಾವಧಿಯಲ್ಲಿ ಹಲವು ಏರಿಳಿತಗಳು ಕಂಡಿದ್ದರು. ವೃತ್ತಿ ನಿಷ್ಠನಾಗಿ ಬೋಧನೆಗೆ ಮೋಸ ಮಾಡದೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಿದೆನೆಂಬ ಆತ್ಮಭಿಮಾನ ನನ್ನಲ್ಲಿದೆ. ಶಾಲೆಗಾಗಿ, ಮಕ್ಕಳ ಶ್ರೇಯೋಭಿವೃದ್ದಿಗಾಗಿ ದುಡಿಯುತ್ತಿದ್ದೆನೆ. ಇನ್ನು ದುಡಿಯುವ ಹುಮ್ಮಸ್ಸಿದೆ. ಈ ಶಾಲೆಯಿಂದ, ಮಕ್ಕಳಿಂದ, ವೃತ್ತಿ ಮಿತ್ರರಿಂದ, ಸಾಕಷ್ಟು ಕಲಿತಿದ್ದೇನೆ. ಇನ್ನು ಕಲಿಬೇಕಾದದ್ದು ಬೇಕಾದಷ್ಟಿದೆ.
ಯದಗಿರಿ ಜಿಲ್ಲೆ ನನಗ್ಯಾವುದು ಕೊರತೆ ಮಾಡಿಲ್ಲ ಒಬ್ಬ ಉತ್ತಮ ಶಿಕ್ಷಕನಾಗಿ ಗುರುತಿಸಿ ಪುರಸ್ಕರಿಸಿದೆ. ನನ್ನನೊಬ್ಬ ಕವಿ, ಸಾಹಿತಿಯಾಗಿ ಮಾಡಿ ಅನೇಕ ವೇದಿಕೆಗಳ ಮೇಲೆ ಸತ್ಕರಿಸಿ ಸನ್ಮಾನಿಸಿದೆ.
ಸಂಪನ್ಮೂಲ ವ್ಯಕ್ತಿಯಾಗಿ ಗೌರವಿಸಿದೆ. ಪ್ರತಿ ವಿಷಯದಲ್ಲೂ ನನ್ನ ಶಾಲೆ. ಪ್ರಾಂಶುಪಾಲರು ಶಿಕ್ಷಕರು ಮಕ್ಕಳು ನನ್ನ ಜೊತೆಗಿದ್ದಾರೆ. ನಮ್ಮ KREIS ಸಂಸ್ಥೆಯು ನನ್ನನ್ನ ಆರ್.ಆಯ್.ಇ ಮೂಲಕ ತರಬೇತಿ ನೀಡಿ ರಾಜ್ಯ ಹಿಂದಿ ವಿಷಯ ಸಂಪನ್ಮೂಲ ವ್ಯಕ್ತಿಯನ್ನಾಗಿ ಮಾಡಿದೆ. ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ ಲರ್ನಿಂಗ್, ಪಾಸಿಂಗ್ ಪ್ಯಾಕೆಜ್, ವಾರ್ಷಿಕ ಕ್ರಿಯಾಯೋಜನೆ, ಮಾದರಿ ಪ್ರಶ್ನೆ ಪತ್ರಿಕೆ ತಯಾರಿಕೆ, ಸಂಘದ ಅನೇಕ ಕಾರ್ಯಗಳಲ್ಲಿ ನನ್ನನ್ನ ಒಬ್ಬ ಸದಸ್ಯನಾಗಿ ಕೆಲಸ ಮಾಡಿದ ಖುಷಿ ಇದೆ. ಸೆಟಲೈಟ ಮೂಲಕ ಡಿ.ಎಸ್.ಈ.ಆರ್.ಟಿ ಸ್ಟುಡಿಯೋದಲ್ಲಿ ಟೆಲಿ ಕಾಂಪ್ರೆನ್ಸ್ ಮೂಲಕ ತರಬೇತಿ ನೀಡಲು ನಮ್ಮ ಸಂಘ ಅವಕಾಶ ಮಾಡಿಕೊಟ್ಟಿದ್ದು ಸಂತಸ ತಂದಿದೆ. . .
ನನಗೆ ಅನ್ನಕೊಟ್ಟು, ಸುಂದರ ಬದುಕು ಕಟ್ಟಿಕೊಳ್ಳು ಅನುಕೂಲ ಮಾಡಿ ನೆಮ್ಮದಿ ಬದುಕಿಗೆ ಮುನ್ನುಡಿ ಬರೆದ ಈ ನನ್ನ ಹೆಮ್ಮೆಯ ಕ್ರೈಸ್ ಸಂಸ್ಥೆಗೆ ಯಾವಾಗಲು ಚಿರ ಋಣಿಯಾಗಿರುವೆ.
ಧನ್ಯವಾದಗಳೊಂದಿಗೆ,
ಇಂತಿ ನಿಮ್ಮವ
■ ಬಸವರಾಜ ಭೂತಿ. ಹಿಂದಿ ಭಾಷಾ ಶಿಕ್ಷಕರು
Comments
Post a Comment